16 Apr 2025

“ಬಸವತತ್ವಜ್ಞಾನ ದರ್ಶನ” ಒಂದು ದಿನದ ಉಪನ್ಯಾಸ ಶಿಬಿರ ದಿನಾಂಕ: ೧೩-೦೪-೨೦೨೫

ಬಸವಕೇಂದ್ರ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ, ಇಲಕಲ್ಲ.
ಶರಣ ಸಿದ್ಧಾಂತ ವಿದ್ಯಾಪೀಠ,
“ಬಸವತತ್ವಜ್ಞಾನ ದರ್ಶನ” ದಿನಾಂಕ: ೧೩-೦೪-೨೦೨೫

ಇಲಕಲ್ಲ- ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಇಲಕಲ್ಲ. ಇಲ್ಲಿನ ವಿದ್ಯಾರ್ಥಿನಿಯರಿಗೆ ಬಸವಕೇಂದ್ರ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ, ಇಲಕಲ್ಲ. ಶರಣಸಿದ್ಧಾಂತ ವಿದ್ಯಾಪೀಠ, ಇವರೊಂದಿಗೆÀ “ಬಸವತತ್ವಜ್ಞಾನ ದರ್ಶನ” ಎಂಬ ಶೀರ್ಷಿಕೆಯಡಿ ಒಂದು ದಿನದ ಉಪನ್ಯಾಸ ಶಿಬಿರವನ್ನು ಶ್ರೀಮಠದ ದಾಸೋಹ ಭವನದಲ್ಲಿ ದಿ: ೧೩-೦೪-೨೦೨೫ ರವಿವಾರದಂದು ಆಯೋಜಿಸಲಾಗಿತ್ತು. ನಮ್ಮ ಮಹಾವಿದ್ಯಾಲಯದ ೧೨೫ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿನಿಯರಿಗೆ ಉಪನ್ಯಾಸ ನೀಡಲಾಯಿತು. ಆರಂಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ಯಾರ್ಥಿನಿಯರ ನೋಂದಣಿ ಪ್ರಕ್ರಿಯೆ ಮತ್ತು ಅವರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದರ ಜವಾಬ್ದಾರಿಯನ್ನು ಶ್ರೀಮತಿ. ಎಸ್,ಆರ್, ಕಲ್ಯಾಣಶೆಟ್ಟಿ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ೪೦ ನಿಮಿಷದ ಒಂದು ಅವಧಿಯಂತೆ ಒಟ್ಟು ೬ ವಿಷಯಗಳ ಆರು ಅವಧಿಗಳಲ್ಲಿ ಉಪನ್ಯಾಸ ಏರ್ಪಡಿಸಲಾಗಿತ್ತು.
ಮೊದಲನೆಯ ಅವಧಿಯಲ್ಲಿ ‘ಬಸವ ತತ್ವದ ಪರಿಚಯ ಮತ್ತು ಇತಿಹಾಸ’ ಎಂಬ ವಿಷಯದ ಕುರಿತು ವಿದ್ಯಾರ್ಥಿನಿಯರಿಗೆ ವಿವರಿಸಲಾಯಿತು. ಈ ವಿಷಯದ ನಿರ್ವಹಣೆಯನ್ನು ಶ್ರೀಮತಿ. ಸವಿತಾ ಮಾಟೂರ ಅವರು ವಹಿಸಿದ್ದರು. ಎರಡನೆಯ ಅವಧಿಯಲ್ಲಿ ‘ಬಸವ ತತ್ವ ಮತ್ತು ಸಂವಿಧಾನ’ ವಿಷಯದ ಕುರಿತು ಉಪನ್ಯಾಸ ನೀಡಲಾಯಿತು. ಈ ವಿಷಯದ ನಿರ್ವಹಣೆಯನ್ನು ಪ್ರೊ. ಜೆ. ಎಸ್. ಭಮಸಾಗರ ಅವರು ವಹಿಸಿದ್ದರು. ಮೂರನೆಯ ಅವಧಿಯಲ್ಲಿ ‘ನೈತಿಕ ಪ್ರಜ್ಞೆ ಮತ್ತು ಸರಳ ಜೀವನ’ ಎಂಬ ವಿಷಯದ ಕುರಿತು ಮಾಹಿತಿ ನೀಡಲಾಯಿತು. ಈ ವಿಷಯದ ನಿರ್ವಹಣೆಯನ್ನು ಪ್ರೊ. ಡಿ. ಬಿ. ಮಾಗಿ ಅವರು ವಹಿಸಿದ್ದರು. ನಾಲ್ಕನೆಯ ಅವಧಿಯಲ್ಲಿ ‘ವಚನಗಳಲ್ಲಿ ವಿಜ್ಞಾನ ಮತ್ತು ಮೂಢನಂಬಿಕೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಾಯಿತು. ಈ ವಿಷಯದ ನಿರ್ವಹಣೆಯನ್ನು ಶ್ರೀ ಮಲ್ಲಯ್ಯ ಗಣಾಚಾರಿ ಅವರು ವಹಿಸಿದ್ದರು. ಐದನೆಯ ಅವಧಿಯಲ್ಲಿ ‘ರಾಷ್ಟçಪ್ರಜ್ಞೆ ಮತ್ತು ಮಹಾಂತ ಜೋಳಿಗೆ’ ವಿಷಯದ ಕುರಿತು ವಿವರಿಸಲಾಯಿತು. ಈ ವಿಷಯದ ನಿರ್ವಹಣೆಯನ್ನು ಪ್ರೊ. ಟಿ. ಎಂ. ಕುಲಕರ್ಣಿ ಅವರು ವಹಿಸಿದ್ದರು.
ಪರಮಪೂಜ್ಯ ಮ.ನಿ.ಪ್ರ. ಗುರುಮಹಾಂತ ಸ್ವಾಮಿಗಳವರು ‘ಇಷ್ಟಲಿಂಗದ ವೈಜ್ಞಾನಿಕತೆ’ ಎಂಬ ವಿಷಯದ ಕುರಿತು ವಿದ್ಯಾರ್ಥಿನಿಯರಿಗೆ ವಿಶೇಷ ಉಪನ್ಯಾಸ ಮತ್ತು ಆಶೀರ್ವಚನ ನೀಡಿದರು. ನಂತರದಲ್ಲಿ ವಿರಾಮದ ಬಳಿಕ ಎಲ್ಲ ವಿದ್ಯಾರ್ಥಿನಿಯರಿಗೆ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು. ಇದರ ಜವಾಬ್ದಾರಿಯನ್ನು ಪ್ರೊ. ಎನ್. ಎಚ್. ಬೊಮ್ಮನಾಳ ಹಾಗೂ ಪ್ರೊ. ಎಂ. ಜೆ. ಮರೋಳ ಅವರು ವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಂವಾದ ಮತ್ತು ಪ್ರಮಾಣಪತ್ರ ವಿತರಣೆ ನಡೆಸಲಾಯಿತು. ಇದನ್ನು ಶ್ರೀ. ಸಂಗಣ್ಣ ಗದ್ದಿ, ಪ್ರೊ. ಆರ್. ಎನ್. ಗುಗ್ಗರಿ ಹಾಗೂ ಶ್ರೀ. ಎಂ. ಎಸ್. ಬೆಳವಣಕಿ ಅವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಬೆಳಗಿನ ಉಪಹಾರ ಮತ್ತು ಮದ್ಯಾಹ್ನದ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಮ್ಮ ಮಹಾವಿದ್ಯಾಲಯದ ಸುಮಾರು ೧೨೫ ವಿದ್ಯಾರ್ಥಿನಿಯರು ಈ ಶಿಬಿರದಲ್ಲಿ ಭಾಗವಹಿಸಿದ್ದರು.

Download