02 May 2025

ಮಹಾವಿದ್ಯಾಲಯದಲ್ಲಿ ‘ಭಾರತೀಯ ಸಾಂಸ್ಕೃತಿಕ ದಿನ ಆಚರಣೆ. ೨೬-೦೪-೨೦೨೫

ಇಲಕಲ್ಲ- ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಇಲಕಲ್ಲದಲ್ಲಿ ದಿನಾಂಕ: ೨೬-೦೪-೨೦೨೫ ರಂದು ಐ.ಕ್ಯೂ.ಎ.ಸಿ ಅಡಿಯಲ್ಲಿ “ಭಾರತೀಯ ಸಾಂಸ್ಕೃತುಕ ದಿನಾಚರಣೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಬಾಲಕಿಯರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಇಲಕಲ್ಲದ ಜೀವಶಾಸ್ತç ಉಪನ್ಯಾಸಕರಾದ ಶ್ರೀಮತಿ ವಿಜಯಾ ಎಚ್ ಮಳಗೌಡರ ಭಾಗವಹಿಸಿ ಮಾತನಾಡುತ್ತಾ ಭಾರತೀಯ ಸಂಸ್ಕೃತಿಯು ಅತ್ಯಂತ ಗೌರವಯುತವಾದ, ಮೌಲ್ಯಯುತವಾದ ಜೀವನಶೈಲಿ, ಉಡುಗೆ, ತೊಡುಗೆ, ಆಚರಣೆ ಮತ್ತು ಚಿಂತನೆಗಳನ್ನು ಹೊಂದಿದ್ದು ಜಗತ್ತಿಗೆ ಮಾದರಿಯಾಗಿದೆ. ಅದನ್ನು ನಾವು ಅನುಸರಿಸಬೇಕೆಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಎಸ್.ವ್ಹಿ.ಎಂ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಇಲಕಲ್ಲದ ಚೇರಮನ್ನರಾದ ಶ್ರೀ ಶರಣಪ್ಪ ಅಕ್ಕಿಯವರು ಮಾತನಾಡಿ, ಭಾರತೀಯರಾಧ ನಾವು ಎಲ್ಲರಿಗೂ ಆದರ್ಶವಾದ ನಮ್ಮ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೊಗುತ್ತಿದ್ದುದು ವಿಷಾದನೀಯ. ಆದ್ದರಿಂದ ಇಂತಹ ಕಾರ್ಯಕ್ರಮಗಳ ಮೂಲಕ ಸಂಸ್ಕೃತಿಯ ಜಾಗೃತಿಯನ್ನುಂಟು ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಶ್ರೀ ಬಿ. ಬಿ. ಸುಗ್ಗಮದ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕಾರ್ಯಕ್ರಮದಲ್ಲಿ ಕು. ನೀಲಮ್ಮ ಪಲದಿನ್ನಿ ಹಾಗೂ ಕು. ರೂಪಾ ಬಿರಾದಾರ ನಿರೂಪಿಸಿದರು. ಕು. ರಕ್ಷಿತಾ ಕುಲಕರ್ಣಿ ಪ್ರಾಥಿಸಿದರು. ಕು. ಸಾವಿತ್ರಿ ಕಟಗಿ ಅತಿಥಿ ಪರಿಚಯ ಮಾಡಿಕೊಟ್ಟರು. ಕು. ದೀಪಾ ಟಕ್ಕಳಕಿ ಸ್ವಾಗತ ಭಾಷಣ ಮಾಡಿದರು. ಕು. ದೀಪಾ ತುರಡಗಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಕು. ಅಪೂರ್ವ ಬಡಿಗೇರ ವಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಚೇರಮನ್ನರಾದ ಶ್ರೀ. ಬಿ.ಎಂ. ಕಬ್ಬಿಣದ ಅವರು ವಹಿಸಿದ್ದರು. ಐ.ಕ್ಯೂ.ಎ.ಸಿ ಸಂಯೋಜಕರಾದ ಪ್ರೊ. ಪಿ.ಆರ್. ಪಾಟೀಲ, ಒಕ್ಕೂಟ ಚೇರಮನ್ನರಾದ ಪ್ರೊ. ಟಿ. ಎಂ. ಕುಲಕರ್ಣಿ, ಪಠ್ಯೇತರ ವಿಭಾಗದ ಸಂಚಾಲಕರಾದ ಶ್ರೀ. ಎಂ. ಎನ್. ಗೌಡರ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಕು. ಸುಮೇರಾ ಮತ್ತು ಕು. ನಂದಿತಾ ಗಚ್ಚಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಕು. ಸಂಪದಾ ಮುಳಗುಂದ ಹಾಗೂ ಭಾರತಿ ಪಾಟೀಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Download