ಮಾಸಿಕ ದೀಪ್ತಿ-ಓದುವ ನೆಲೆಗಳು ಎಂಬ ಕಾರ್ಯಕ್ರಮ ಆಚರಣೆ. ೦೨-೦೫-೨೦೨೫
ಇಲಕಲ್ಲ- ಸ್ಥಳೀಯ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಇಲಕಲ್ಲ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಲೂಕ ಸಮಿತಿ ಇಲಕಲ್ಲ ಇವರ ಸಂಯುಕ್ತ ಆಶ್ರಯದಲ್ಲಿ ಕಥೆ ಕವನ ವಿಮರ್ಶಾ ಸ್ಪರ್ಧೆಯ ಪ್ರಶಸ್ತಿ ವಿತರಣೆ ಮತ್ತು ಮಾಸಿಕ ದೀಪ್ತಿ-ಓದುವ ನೆ.ಲೆಗಳು ಎನ್ನುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸ್.ವ್ಹಿ.ಎಂ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಸದಾಶಿವ ದೊಡ್ಡಮನಿಯವರು ಭಾಗವಹಿಸಿ ನಮ್ಮ ಓದು ಬಹುಶಿಸ್ತೀಯವಾಗಿರಬೇಕು. ಕಥೆ, ಕವನಗಳನ್ನು ಓದುವವರು, ವಿಮರ್ಶಿಸುವವರು ಮೊದಲು ವಿಮರ್ಶೆಯ ವಿಧಾನವನ್ನು ಅರಿತುಕೊಳ್ಳಬೇಕು. ಆಗ ಮಾತ್ರ ಓದು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಲೂಕ ಸಮಿತಿ ಇಲಕಲ್ಲದ ಅಧ್ಯಕ್ಷರಾದ ಪ್ರೊ. ಎಸ್. ಬಿ. ಬಿರಾದಾರ ಅವರು ಮಾತನಾಡಿ ಪ್ರಾದೇಶಿಕ ಭಾಷೆಗಳು ಕಣ್ಮರೆಯಾಗುತ್ತಿರುವ ಈ ಸಮಯದಲ್ಲಿ ಆಯಾ ಭಾಷೆಗಳನ್ನಾಡುವವರು ಭಾಷೆಯ ಸಾಹಿತ್ಯವನ್ನು ರಚನೆ ಮಾಡುವುದರ ಮೂಲಕ, ಓದುವುದರ ಮೂಲಕ, ಭಾಷೆಯನ್ನಾಡುವುದರ ಮೂಲಕ ಭಾಷೆಯನ್ನು ಉಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ. ಬಿ. ಬಿ. ಸುಗ್ಗಮದ ಅವರು ವಹಿಸಿದ್ದರು. ಕು. ಪವಿತ್ರಾ ಮಾದರ ಪ್ರಾರ್ಥಿಸಿದರು. ಶ್ರೀ ರವಿ. ವಾಯ್. ವಾಲಿಕಾರ ಸ್ವಾಗತಿಸಿದರು. ಶ್ರೀ. ಟಿ. ಎಂ. ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.